ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಎನ್.ಹೊಸಕೋಟೆ: ಬೀದಿಗೆ ಬದನೆ ಸುರಿದು ರೈತರ ಆಕ್ರೋಶ

Last Updated 1 ಫೆಬ್ರುವರಿ 2018, 7:10 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ಮಧ್ಯವರ್ತಿಗಳ ಹಾವಳಿಯಿಂದ ಬದನೆಕಾಯಿ ಬೆಲೆ ಕಡಿಮೆಯಾಗಿರುವುದರಿಂದ ಬೇಸರಗೊಂಡ ರೈತ ಗ್ರಾಮದ ಸಂತೆಯಲ್ಲಿ ಬೀದಿಗೆ ಬದನೆಕಾಯಿ ಸುರಿದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.

ಆರ್.ಡಿ.ರೊಪ್ಪ ಗ್ರಾಮದ ರೈತ ಪರಮೇಶ್ ಸಂತೆಯಲ್ಲಿ ಮಾರಾಟ ಮಾಡಲು ಸುಮಾರು 30 ಚೀಲ ಬದನೆಕಾಯಿ ಕಿತ್ತು ತಂದಿದ್ದಾರೆ. ಪ್ರತಿಯೊಂದು ಚೀಲದಲ್ಲಿ ಸುಮಾರು 15 ರಿಂದ 20 ಕೆಜಿ ತೂಕದಷ್ಟು ಬದನೆಕಾಯಿ ತುಂಬಿದ್ದು, ಅವುಗಳನ್ನು ಸ್ಥಳೀಯ ವ್ಯಾಪಾರಸ್ಥರು ಮತ್ತು ದಲ್ಲಾಳಿಗಳು ಮೂಟೆಯೊಂದಕ್ಕೆ ₹ 20 ನೀಡಿ ಖರೀದಿ ಮಾಡಲು ಮುಂದಾಗಿದ್ದಾರೆ.

‘ರೈತನಿಗೆ ಕೆ.ಜಿಗೆ ₹ 1 ದೊರೆತ್ತಿದ್ದು, ಸರ್ಕಾರ ಇಂತಹ ಸಮಸ್ಯೆಗಳಿಗೆ ಸ್ಪಂದಿಸಿ ವಾರದ ಸಂತೆಗಳಲ್ಲಿ ರೈತರಿಗೆ ಅನುಕೂಲವಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರು ಬೆಳೆಯುವುದನ್ನೇ ನಿಲ್ಲಿಸಿ ಬೀದಿಪಾಲು ಅಗಬೇಕಾಗುತ್ತದೆ’ ಎಂದು ಲಕ್ಷ್ಮಿನಾರಾಯಣಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT