ಇದೇ ಕಾರ್ಖಾನೆಯ 70ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಇಲ್ಲಿಗೆ ವಿದೇಶಿ ವ್ಯಕ್ತಿಗಳು ಬಂದ ಕುರಿತು ಸಚಿವರಾದ ಸುರೇಶ್ಕುಮಾರ್, ಸುಧಾಕರ್, ಸೋಮಣ್ಣ ಈ ಹಿಂದೆಯೇ ಹೇಳಿದ್ದರು. ಸ್ಥಳೀಯ ಶಾಸಕ ಹರ್ಷವರ್ಧನ್ ಸಹ ದೆಹಲಿಯಿಂದ ಪ್ರಭಾವ ಬೀರಲಾಗಿದೆ ಎಂದು ತಿಳಿಸಿದ್ದರು. ಹೀಗಾಗಿ, ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.