ಮೈಸೂರು: ಮೈಸೂರಿನ ಬೇಸ್ ಪಿಯು ಕಾಲೇಜಿನ ವಿದ್ಯಾರ್ಥಿ ವಿ.ವಾಸುದೇವ ಅವರು ‘ನೀಟ್’ ಪರೀಕ್ಷೆಯಲ್ಲಿ 655 ಅಂಕ ಗಳಿಸಿದ್ದು, ರಾಷ್ಟ್ರಮಟ್ಟದಲ್ಲಿ 761ನೇ ರ್ಯಾಂಕ್ ಗಳಿಸಿದ್ದಾರೆ.
ಇವರು ಸಿಇಟಿಯಲ್ಲಿ ಯೋಗವಿಜ್ಞಾನದಲ್ಲಿ 2ನೇ ರ್ಯಾಂಕ್ ಪಡೆದಿದ್ದರು. ಪಶು ವಿಜ್ಞಾನ (4), ಔಷಧ ವಿಜ್ಞಾನ (7), ಬಿ-ಫಾರ್ಮಾ ಹಾಗೂ ಡಿ-ಫಾರ್ಮಾ (7) ವಿಭಾಗದಲ್ಲಿಯೂ ಉತ್ತಮ ಸ್ಥಾನ ಪಡೆದಿರುವ ಅವರು ಕೃಷಿ ವಿಜ್ಞಾನದಲ್ಲಿ 13ನೇ ರ್ಯಾಂಕ್ ಪಡೆದಿದ್ದರು.
ಅಂತೆಯೇ, ಆಕಾಶ್ ಶಿಕ್ಷಣ ಸಂಸ್ಥೆಯಲ್ಲಿ ‘ನೀಟ್’ ತರಬೇತಿ ಪಡೆದಿದ್ದ ಎಂ.ಆರ್.ವಿಜಯ್ ಶ್ರೀವತ್ಸ ಅವರಿಗೆ 660 ಅಂಕ ಗಳಿಸಿದ್ದು, 556ನೇ ರ್ಯಾಂಕ್ ಗಳಿಸಿದ್ದಾರೆ. ಇದೇ ಸಂಸ್ಥೆಯಲ್ಲಿ ತರಬೇತಿ ಪಡೆದ ಗಗನ್ ಶೇಷಾದ್ರಿ 608 ಅಂಕ ಗಳಿಸಿ ಮೀಸಲಾತಿ ವಿಭಾಗದಲ್ಲಿ 85ನೇ ರ್ಯಾಂಕ್ ಗಳಿಸಿದ್ದಾರೆ.