ಮೈಸೂರು: ‘ಡಿ.ಕೆ.ಶಿವಕುಮಾರ್ ಶ್ರೀಮಂತ ವ್ಯಕ್ತಿಯಾಗಿದ್ದು, ನುರಿತ ರಾಜಕಾರಣಿಯೂ ಹೌದು. ಅವರ ನೇತೃತ್ವದಲ್ಲಿ ಬೇರೆ ಬೇರೆ ಕಾರ್ಖಾನೆಗಳಿವೆ. ಸಕ್ಕರೆ ಕಾರ್ಖಾನೆಗೂ ಅವರು ಬಿಡ್ ಮಾಡಲಿ. ಯಾರು ಹೆಚ್ಚು ಬಿಡ್ ಸಲ್ಲಿಸುವರೋ ಅವರಿಗೆ ಗುತ್ತಿಗೆಗೆ ಕೊಡಲಿ’ ಎಂದು ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಮಂಗಳವಾರ ಇಲ್ಲಿ ಸವಾಲು ಹಾಕಿದರು.