ಇದರಿಂದ ತೀವ್ರವಾಗಿ ಆಘಾತಕ್ಕೆ ಒಳಗಾಗಿದ್ದ ವೀರಭದ್ರ ಅವರು ಆಸ್ಪತ್ರೆಗೆ ಬಂದಾಗ ನಡುಗುತ್ತಲೇ ಇದ್ದರು. ಗುರುವಾರ ಇಡೀ ದಿನ ಅವರು ಆಘಾತದಿಂದ ಹೊರ ಬಂದಿರಲಿಲ್ಲ. ಕುತ್ತಿಗೆ ಬಳಿ ಗಾಯವಾಗಿ ಬಳಲಿದ್ದರು. ಸದ್ಯ, ಶುಕ್ರವಾರ ಅವರು ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಆಘಾತದಿಂದ ಹೊರ ಬಂದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.