ಇಲ್ಲಿನ ವಿದ್ಯಾರಣ್ಯಾಪುರಂ ನಿವಾಸಿ ಭೈರಯ್ಯ ಅವರು ಬೆಂಗಳೂರಿನ ಕೆಂಗೇರಿಯ ಅಂಚೆಪಾಳ್ಯದಲ್ಲಿನ ಯುಎಸ್ಎ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತನ್ನ ಮೊಮ್ಮಗಳಿಗೆ 2018ರ ಜುಲೈ 18ರಂದು ₹ 500 ರೂಪಾಯಿಗಳನ್ನು ‘ಎಲೆಕ್ಟ್ರಾನಿಕ್ ಮನಿ ಆರ್ಡರ್’ ರೂಪದಲ್ಲಿ ಚಾಮುಂಡಿಪುರಂ ಅಂಚೆ ಕಚೇರಿಯಿಂದ ಕಳುಹಿಸಿದ್ದರು. ಆದರೆ, ಈ ಹಣ 12 ದಿನ ಕಳೆದರೂ ತಲುಪಿರಲಿಲ್ಲ.