ಸೆ.1ರ ಸಂಜೆ 6.45ಕ್ಕೆ ವಿದ್ವಾನ್ ಟಿ.ಎಂ.ಕೃಷ್ಣ ಅವರ ಗಾಯನವಿದೆ. 2ರಂದು ಅಕ್ಕರೈ ಶುಭಲಕ್ಷ್ಮಿ, ಅಕ್ಕರೈ ಸ್ವರ್ಣಲತಾ ಅವರ ದ್ವಂದ್ವ ಗಾಯನ, 3ರಂದು ವಿದ್ವಾನ್ ಮಲ್ಲಾಡಿ ಸಹೋದರರಿಂದ ದ್ವಂದ್ವ ಗಾಯನ, 4ರಂದು ವಿದ್ವಾನ್ ಅನಿಲ್ ಶ್ರೀನಿವಾಸನ್– ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರ ಪಿಯಾನೊ– ಬಾನ್ಸುರಿ ಜುಗಲ್ಬಂದಿ, 5ರಂದು ಅಭಿಷೇಕ್ ರಘುರಾಂ ಗಾಯನ, 6ರಂದು ಜಯಂತಿ ಕುಮರೇಶ್ ಅವರ ವೀಣಾ ವಾದನವಿದೆ’ ಎಂದರು.