‘ಈ ಹಿಂದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ದೆಹಲಿ ರಾಜ್ಯಗಳಿಗೆ ಬೆಂಗಳೂರಿನಿಂದ ಜರ್ಬೆರಾ ಹೂವು ಹೆಚ್ಚಾಗಿ ಸರಬರಾಜಾಗುತ್ತಿತ್ತು. ಈಗ ಕಡಿಮೆ ಪ್ರಮಾಣದ ಹೂವು ರಫ್ತಾಗುತ್ತಿದ್ದು, ಸ್ಥಳೀಯ ಹೂವು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಜರ್ಬೇರಾ ಹೂವುಗಳನ್ನು ಕಿತ್ತು ಕಸದ ಗುಂಡಿಗೆ ಹಾಕಲಾಗುತ್ತಿದೆ’ ಎಂದು ಸೋಮಶೇಖರ್ ಹೇಳಿದರು.