ಪಿರಿಯಾಪಟ್ಟಣ (ಮೈಸೂರು): ತಾಲ್ಲೂಕಿನ ಇಬ್ಬರು ರೈತರು, ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುದ್ದನಹಳ್ಳಿ ಗ್ರಾಮದ ಸೋಮಶೇಖರ್(28) ಮತ್ತು ಮಾಗಳಿಯ ಹೊನ್ನೇಗೌಡ (43) ಮೃತಪಟ್ಟವರು.
ಸೋಮಶೇಖರ್ ಅವರು ಪಂಚವಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ₹ 3 ಲಕ್ಷ ಬೆಳೆ ಸಾಲ ಪಡೆದಿದ್ದರು. ಬೆಳೆ ವೈಫಲ್ಯದಿಂದಾಗಿ ನೊಂದು ತಮ್ಮ ತಂಬಾಕು ಬ್ಯಾರನ್ನಲ್ಲಿಯೇ ನೇಣಿಗೆ ಶರಣಾಗಿದ್ದಾರೆ.
ಹೊನ್ನೇಗೌಡರ ಹೆಸರಿನಲ್ಲಿ ₹ 2 ಲಕ್ಷ ಬೆಳೆ ಸಾಲ ಇತ್ತು. ಸಾಲ ಬಾಧೆಯಿಂದ ನೊಂದು ತಮ್ಮ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.