ಮೈಸೂರು: ‘ಕರ್ನಾಟಕದಲ್ಲಿ ಜಾತೀಯತೆ ಪೋಷಿಸುವ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹಳ ಚೆನ್ನಾಗಿ ಮಾಡುತ್ತಿದ್ದಾರೆ. ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ’ ಎಂಬ ಘೋಷವಾಕ್ಯದಡಿ ಸರ್ಕಾರ ನಡೆಯುತ್ತಿಲ್ಲ. ‘ಲಿಂಗಾಯತರಿಂದ, ಲಿಂಗಾಯತರಿಗಾಗಿ, ಲಿಂಗಾಯತರಿಗೋಸ್ಕರ’ ಇರುವ ಸರ್ಕಾರ ಇದು’ ಎಂದು ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಟೀಕಿಸಿದರು.