ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ | ಮುಖ್ಯಮಂತ್ರಿಯಿಂದ ಜಾತೀಯತೆ ಪೋಷಣೆ: ಪ್ರೊ.ರವಿವರ್ಮ

ರಾಜ್ಯ ಸರ್ಕಾರದ ನೀತಿ; ಮಠಾಧೀಶರ ನಡೆಗೆ ಕಿಡಿ
Last Updated 20 ಫೆಬ್ರುವರಿ 2021, 21:48 IST
ಅಕ್ಷರ ಗಾತ್ರ

ಮೈಸೂರು: ‘ಕರ್ನಾಟಕದಲ್ಲಿ ಜಾತೀಯತೆ ಪೋಷಿಸುವ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹಳ ಚೆನ್ನಾಗಿ ಮಾಡುತ್ತಿದ್ದಾರೆ. ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ’ ಎಂಬ ಘೋಷವಾಕ್ಯದಡಿ ಸರ್ಕಾರ ನಡೆಯುತ್ತಿಲ್ಲ. ‘ಲಿಂಗಾಯತರಿಂದ, ಲಿಂಗಾಯತರಿಗಾಗಿ, ಲಿಂಗಾಯತರಿಗೋಸ್ಕರ’ ಇರುವ ಸರ್ಕಾರ ಇದು’ ಎಂದು ಮಾಜಿ ಅಡ್ವೊಕೇಟ್‌ ಜನರಲ್ ಪ್ರೊ.ರವಿವರ್ಮ ಕುಮಾರ್‌ ಟೀಕಿಸಿದರು.

ಮೈಸೂರು ವಿಶ್ವವಿದ್ಯಾಲಯ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವತಿಯಿಂದ ಶನಿವಾರ ನಡೆದ, ಅಂತರರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಡಿಯೂರಪ್ಪ ಅವರು 16 ಜಾತಿಗಳ ಅಭಿವೃದ್ಧಿ ಮಂಡಳಿ ರಚಿಸಿ, ರಾಜ್ಯದ ಬೊಕ್ಕಸದಿಂದ ಸಾಕಷ್ಟು ಹಣ ಕೊಟ್ಟಿದ್ದಾರೆ. ಅವರ ಜಾತಿಗೆ ₹ 500 ಕೋಟಿ ಮೀಸಲಿಟ್ಟಿದ್ದಾರೆ. ಜಾತೀಯತೆಯನ್ನು ರಾಜಾರೋಷವಾಗಿ ಪೋಷಿಸುತ್ತಿದ್ದಾರೆ. ಸಂವಿಧಾನ ವಿರೋಧಿ ಚಟುವಟಿಕೆ ನಡೆಯುತ್ತಿದೆ’ ಎಂದು ಕಿಡಿಕಾರಿದರು.

ಒಂದೊಂದು ಜಾತಿಯ ಮಠಗಳಿಗೆ ಇಂತಿಷ್ಟು ಹಣ ನೀಡಲಾಗಿದೆ. ಜನರ ದುಡ್ಡನ್ನು ಜಾತಿಗಳಿಗಾಗಿ ಮುಡುಪಾಗಿಟ್ಟಿರುವ ರಾಜ್ಯ ಸರ್ಕಾರದ ನೀತಿಯೇ ಇಂದು ನಡೆಯುತ್ತಿರುವ ಮೀಸಲಾತಿ ಚಳವಳಿಗಳಿಗೆ ಕಾರಣ. ಜಾತ್ಯತೀತ ಸರ್ಕಾರ ಇದ್ದಿದ್ದರೆ ಇಂತಹ ಚಳವಳಿಯೇ ನಡೆಯುತ್ತಿರಲಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT