ಮೈಸೂರು: ಪ್ರೊಬೆಷನರಿ ಡಿಕ್ಲೇರ್ ಮಾಡದಿದ್ದನ್ನು ಖಂಡಿಸಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಮಮತಾ ಅವರು ಕುಲಪತಿ ಅವರ ಕಚೇರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಆದೇಶ ಪತ್ರ ಪಡೆದರು.
ಕುಲಪತಿ ಅವರು ಒಪ್ಪಿಗೆ ನೀಡಿದ್ದರೂ ಕುಲಸಚಿವ ರಾಜಣ್ಣ ಅವರು ಅನಾವಶ್ಯಕವಾಗಿ ಪ್ರೊಬೇಷನರಿ ಡಿಕ್ಲೇರ್ ಮಾಡಿಲ್ಲ ಎಂದು ಆರೋಪಿಸಿದರು. ಕೊನೆಗೆ, ರಾಜಣ್ಣ ಅವರು ಪ್ರೊಬೇಷನರಿ ಡಿಕ್ಲೇರ್ ಮಾಡಿದ ಕುರಿತು ಆದೇಶ ಪ್ರತಿ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.