ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ನಿವಾಸದ ಮೇಲೆ ಈಚೆಗೆ ನಡೆದ ದಾಳಿಯನ್ನು ಖಂಡಿಸಿ ನಗರದಲ್ಲಿ ಪ್ರತಿಭಟನೆಗಳು ಮುಂದುವರಿದಿವೆ.
ಸಮತಾ ಸೈನಿಕ ದಳದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಸೇರಿ, ಘಟನೆಯನ್ನು ಖಂಡಿಸಿದರು.
ಈ ಪ್ರಕರಣದ ಹಿಂದೆ ಇರುವ ಶಕ್ತಿಗಳನ್ನು ಗುರುತಿಸಿ, ಬಂಧಿಸಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ನಿರುದ್ಯೋಗಿಗಳಿಗೆ ₹ 5 ಸಾವಿರ ಮಾಸಿಕ ಭತ್ಯೆ ನೀಡಬೇಕು, ಆಶಾ ಕಾರ್ಯಕರ್ತೆಯರಿಗೆ ₹ 12 ಸಾವಿರ ಮಾಸಿಕ ಗೌರವಧನ ನಿಗದಿಪಡಿಸಬೇಕು, ಆನ್ಲೈನ್ ಶಿಕ್ಷಣ ಪದ್ದತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ವೆಂಕಟೇಶ್, ಎಸ್.ವೆಂಕಟರಮಣ, ಎಸ್.ಅಮೃತಾ, ಆರ್.ಕುಮಾರಸ್ವಾಮಿ, ಮುತ್ತುರಾಜ್ ಹಾಗೂ ಇತರರು ಇದ್ದರು.