ಮೈಸೂರು: ದ್ವಿತೀಯ ಪಿಯು 2019ನೇ ಸಾಲಿನ ಪ್ರಾಯೋಗಿಕ ಪರೀಕ್ಷೆ ಹಾಗೂ ಇತರೆ ಶೈಕ್ಷಣಿಕ, ಆಡಳಿತ ವಿಚಾರಗಳ ಚರ್ಚೆಗಾಗಿ ಅ. 20ರಂದು ಮಧ್ಯಾಹ್ನ 3ಕ್ಕೆ ಮಹಾರಾಣಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಪಿಯು ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ಡಿಡಿಪಿಯು ಡಾ.ದಯಾನಂದ ಕರೆದಿದ್ದಾರೆ.
ಪ್ರಸ್ತುತ ಖಾಲಿ ಇರುವ ಬೋಧಕ, ಬೋಧಕೇತರ ಸಿಬ್ಬಂದಿಯ ನೇಮಕ, ಪರೀಕ್ಷೆಗೆ ಸಂಬಂಧಿಸಿದ ವಿಚಾರಗಳು, ಇತ್ಯಾದಿ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಬಹುದಾಗಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳು ಭಾಗವಹಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.