ದೇವರೂ ಕಿವುಡನಾದ: ‘ಪುನೀತಣ್ಣ ಬದುಕಲಿ ಎಂದು ಪದೇ ಪದೇ ಪ್ರಾರ್ಥಿಸಿದ್ದು ದೇವರಿಗೆ ತಲುಪಲಿಲ್ಲ. ದೇವರೂ ಕಿವುಡನಾಗಿಬಿಟ್ಟ’ ಎಂದು ‘ಶಕ್ತಿಧಾಮ’ದ ನಿವಾಸಿ, ಪ್ರಥಮ ಪಿಯು ವಿದ್ಯಾರ್ಥಿನಿ ಸುಷ್ಮಾ ಗದ್ಗದ್ಗಿತರಾದರು. ಉಳಿದವರು ಆಕೆಯಷ್ಟೇ ಶೋಕತಪ್ತರಾಗಿದ್ದರು. ಪುನೀತ್ ರಾಜ್ಕುಮಾರ್ ನಿಧನ ನೀರವ ಮೌನವನ್ನು ಸೃಷ್ಟಿಸಿತ್ತು.