ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್. ಪರಮಶಿವನ್ ರಂಗಯಾನ ಕಾರ್ಯಕ್ರಮ

Last Updated 18 ಜನವರಿ 2021, 10:26 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕದಂಬ ರಂಗ ವೇದಿಕೆ ವತಿಯಿಂದ ‘ರಂಗಭೂಮಿಯ ಧ್ರುವತಾರೆ ಆರ್.ಪರಮಶಿವನ್ ರಂಗಯಾನ’ ಕಾರ್ಯಕ್ರಮವು ಜ. 20 ರಂದು ಸಂಜೆ 5 ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ.

ಲೇಖಕ ಪ್ರೊ.ಸಿ.ವಿ.ಶ್ರೀಧರಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಂಗ ರತ್ನಾಕರ ಸಂಸ್ಥೆಯ ಕಾರ್ಯದರ್ಶಿ ಹನ್ಯಾಳು ಗೋವಿಂದೇಗೌಡ ಹಾಗೂ ಕದಂಬ ರಂಗ ವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ ಅತಿಥಿಗಳಾಗಿ ಭಾಗವಹಿಸುವರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದಿನ ಹಾಗೂ ಇಂದಿನ ರಂಗಭೂಮಿಯ ಕೊಂಡಿಯಂತಿದ್ದ ಪರಮಶಿವನ್ ಅವರು ಇಂದು ನಮ್ಮಡನೆ ಇಲ್ಲ. ಆದರೆ, ರಂಗ ಸಂಗೀತದ ಪರಂಪರೆಗೆ ಅವರು ಬಿಟ್ಟು ಹೋದದ್ದು ಮಾತ್ರ ಯಾರೂ ಊಹಿಸಲಾರದಷ್ಟು. ನಮ್ಮಿಂದ ಕಣ್ಮರೆಯಾಗುವವರೆಗೂ ನವೋಲ್ಲಾಸದ ಯುವಕನಂತೆ ರಂಗಗೀತೆಗಳನ್ನು ಹಾಡುತ್ತಲೇ ಹಾರ್ಮೋನಿಯಂ ನುಡಿಸುತ್ತಲೇ ಸಾಗಿದರು ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT