ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ದೇ.ಜವರೇಗೌಡ ಉದ್ಯಾನದ ಬಳಿ, ಉದಯಗಿರಿಯ ಬಿನ್ನರ್ ಮಿಲ್ ಸಮೀಪ ಮರಗಳು ಧರೆಗುರುಳಿವೆ. ಬನ್ನಿಮಂಟಪದ ಹನುಮಂತನಗರ, ನಾಯ್ಡುನಗರದ ಬಸ್ನಿಲ್ದಾಣ, ಎಂ.ಜಿ.ರಸ್ತೆಯ ಮಧುವನ, ಸ್ಕೌಟ್ ಮತ್ತು ಗೈಡ್ಸ್ ಮೈದಾನ ಹಾಗೂ ತಿ.ನರಸೀಪುರ ಚೆಕ್ಪೋಸ್ಟ್ಗೆ ನೀರು ನುಗಿದೆ. ಪಾಲಿಕೆಯ 3 ಅಭಯ್ ರಕ್ಷಣಾ ತಂಡಗಳು ನೀರನ್ನು ಹೊರ ಹಾಕುವ ಹಾಗೂ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ.