ಮೈಸೂರು: ಜಿಲ್ಲೆಯ ತಿ.ನರಸೀಪುರ, ನಂಜನಗೂಡು ಹಾಗೂ ಮೈಸೂರು ತಾಲ್ಲೂಕುಗಳಲ್ಲಿ ಮಂಗಳವಾರ ರಾತ್ರಿ ಸಾಧಾರಣ ಮಳೆ ಸುರಿದಿದೆ. ಮಳೆಯು ಕೃಷಿ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.
ತಿ.ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ 43 ಮಿ.ಮೀ, ಹತ್ತಹಳ್ಳಿಯಲ್ಲಿ 36, ತಲಕಾಡಿನಲ್ಲಿ 29, ನಂಜನಗೂಡು ತಾಲ್ಲೂಕಿನ ತಾಯೂರಿನಲ್ಲಿ 16.5, ಬಿಳಿಕೆರೆಯಲ್ಲಿ 14.5, ಮೈಸೂರು ತಾಲ್ಲೂಕಿನ ಕಡಕೊಳದಲ್ಲಿ 9, ಆಲನಹಳ್ಳಿಯಲ್ಲಿ 4.5, ರಮ್ಮನಹಳ್ಳಿಯಲ್ಲಿ 5.5 ಮಿ.ಮೀ ಮಳೆಯಾಗಿದೆ.
ಹಲವೆಡೆ ಗುಡುಗು ಮತ್ತು ಮಿಂಚಿನ ಆರ್ಭಟಗಳು ಇದ್ದವು. ಕೆಲವೆಡೆ ಗಾಳಿ ಬಿರುಸಾಗಿ ಬೀಸಿತು. ಇದರಿಂದ ನಗರದ ನ್ಯೂಕಾಂತರಾಜ್ ಅರಸ್ ರಸ್ತೆಯಲ್ಲಿ ತೆಂಗಿನಮರವೊಂದು ಉರುಳಿ ಬಿದ್ದಿದೆ. ಜಯಪುರದ ಬಸ್ನಿಲ್ದಾಣದ ಸಮೀಪ ಭಾರಿ ಗಾತ್ರದ ಮರವೊಂದು ಧರೆಗುರುಳಿ ಶೌಚಾಲಯದ ಕಾಂಪೌಂಡ್ಗೆ ಹಾನಿಯಾಗಿದೆ.