‘ಎಂಟೂವರೆ ಎಕರೆ ಜಮೀನಿದ್ದು, ಮಳೆಯಿಂದ ಬಾಳೆ ಬೆಳೆ ನಾಶವಾಗಿದೆ. ಎರಡು ಪಂಪ್ ಸೆಟ್, 60 ಪೈಪ್, 10 ಜೆಟ್ ಜಲಾವೃತಗೊಂಡಿವೆ. ಯಾವುದೇ ಅಧಿಕಾರ ಬಂದು ನೋಡಿಲ್ಲ, ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಸರ್ಕಾರ ಏನಾದರೂ ಪರಿಹಾರ ನೀಡಬೇಕು’ ಎಂದು ಎಚ್.ಡಿ.ಕೋಟೆ ತಾಲ್ಲೂಕಿನ ನಂಜನಾಯಕನಹಳ್ಳಿ ಗ್ರಾಮದ ರೈತರು ಆಗ್ರಹಿಸಿದರು.