ಮಹೇಶ್ ಚಂದ್ರ ಗುರು ಮಾತನಾಡಿ, ‘ನಾವು ಪಡೆದುಕೊಂಡಿರುವ ಸ್ವಾತಂತ್ರ್ಯ ವನ್ನು ಉಳಿಸಿಕೊಳ್ಳಬೇಕಾದರೆ ಗಾಂಧಿ ಮಾರ್ಗದಲ್ಲಿ ನಡೆಯಬೇಕು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರು ತೋರಿಸಿದ ಮಾರ್ಗವನ್ನು ಅನುಸರಿಸಬೇಕು. ಗಾಂಧಿ ಅವರು ಕಟ್ಟುವ ಮತ್ತು ಬೆಳೆಸುವ ಸಂಕೇತವಾಗಿ ಕಂಡರೆ, ಗೋಡ್ಸೆ ಅವರು ಧ್ವಂಸದ ಸಂಕೇತ. ನಮಗೆ ಬೇಕಾಗಿರುವುದು ಗಾಂಧಿ ಮಾರ್ಗಿಗಳೇ ಹೊರತು ನಾಶ ಗೊಳಿಸುವವರಲ್ಲ’ ಎಂದು ತಿಳಿಸಿದರು.