ಶಂಕರಾಚಾರ್ಯರು ತತ್ವ, ಸಿದ್ಧಾಂತಗಳನ್ನು ಬೋಧಿಸದೇ ಇದ್ದಿದ್ದರೆ ಮುಂದೆ ಬಹಳ ಕಷ್ಟವಾಗುತ್ತಿತ್ತು. ಇವರು ಉಪನಿಷತ್ತಿನ ಜ್ಞಾನಪರಂಪರೆಯನ್ನು ಉಳಿಸಿದರು. ನಂತರ, ಬಂದ ರಾಮಾನುಜಾಚಾರ್ಯ ಹಾಗೂ ಮಧ್ವಾಚಾರ್ಯರು ತಮ್ಮದೇ ಸಿದ್ಧಾಂತ ಪ್ರತಿಪಾದಿಸಿದರು. ಆದರೆ, ಎಲ್ಲರ ಗುರಿಯೂ ಪರಮಾತ್ಮನನ್ನು ಕಾಣುವುದೇ ಆಗಿದೆ’ ಎಂದು ಅಭಿಪ್ರಾಯಪಟ್ಟರು.