ಸಿ.ಡಿ ಪ್ರಕರಣದಲ್ಲಿ ಬಿಜೆಪಿಯವರು ತಮ್ಮನ್ನು ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರೇ ಮಾಡಿದ್ದಾರೆ ಅಂತ ಯಾರಾದರೂ ಹೇಳಿದರೇ? ಇದರ ಹಿಂದೆ ‘ಮಹಾನ್ ನಾಯಕನೊಬ್ಬ’ ಇದ್ದಾನೆ ಎಂದಷ್ಟೇ ಹೇಳಿದ್ದರು. ಆ ಮಹಾನ್ ನಾಯಕ ಇವರೇ ಅಂತ ಏಕೆ ಅಂದುಕೊಂಡುಬಿಟ್ರು? ಈ ರಾಜ್ಯದಲ್ಲಿ ಮಹಾನ್ ನಾಯಕರು ತುಂಬಾ ಜನ ಇದ್ದಾರೆ. ಬಿಜೆಪಿಯಲ್ಲೇ ಒಬ್ಬ ಮಹಾನ್ ನಾಯಕ ಬೆಳೆಯುತ್ತಿದ್ದಾರೆ’ ಎಂದರು.