ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳುವ ಅಂಗವಿಕಲರಿಗಾಗಿ ಅನುಕೂಲವಾಗಲಿ ಎಂದು ಎಲ್ಲ ಶಾಲೆಗಳಲ್ಲಿ ರ್ಯಾಂಪ್ ನಿರ್ಮಿಸುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ ಎಂದು ಎಚ್.ಡಿ.ಕೋಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ದರ್ಶನ್ ವಿಷಯ ಪ್ರಸ್ತಾಪಿಸಿದರು. ಆದರೆ, ಜಿ.ಪಂ ಸದಸ್ಯರು, ‘ರ್ಯಾಂಪ್ ನಿರ್ಮಿಸಲು ಬೇರೆ ಅನುದಾನ ಬಳಸಿ. ನಮಗೆ ಬರುವ ಅನುದಾನದಲ್ಲಿ ಅಂಗವಿಕಲರಿಗೆ ಅಗತ್ಯ ಇರುವ ಸಲಕರಣೆಗಳನ್ನು ನೀಡಿ’ ಎಂದು ಸೂಚಿಸಿದರು.