ಮಡಿಕೇರಿ: ‘ಮೈಸೂರಿನ ರಂಗಾಯಣದ ವಿರುದ್ಧ ಎಡಪಂಥೀಯರ ಗುಂಪು ನಿರಂತರವಾಗಿ ಪಿತೂರಿ ನಡೆಸುತ್ತಿದೆ. ಅಲ್ಲಿ ಒಳ್ಳೆಯ ಕಾರ್ಯಕ್ರಮಕ್ಕೆ ಅಡ್ಡಗಾಲು ಹಾಕುವ ಸಣ್ಣ ಗುಂಪಿದೆ. ತಮ್ಮನ್ನು ತಾವೇ ಬುದ್ಧಿಜೀವಿಗಳು, ಪ್ರಗತಿಪರರು ಎಂದು ಕರೆದುಕೊಂಡಿರುವವರು ಬುದ್ಧಿಜೀವಿಗಳಲ್ಲ, ಲದ್ದಿಜೀವಿಗಳು’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕಿಡಿಕಾರಿದರು.