ಪ್ರಕರಣ ವಿವರ: ಬಂಡೀಪುರ ಹುಲಿ ಯೋಜನೆ ಹೆಡಿಯಾಲ ಉಪ ವಿಭಾಗದ ವ್ಯಾಪ್ತಿಯ ಬಳ್ಳೂರುಹುಂಡಿ ಅರಣ್ಯ ಪ್ರದೇಶದಲ್ಲಿ ಸೆ. 26ರ ಮಧ್ಯರಾತ್ರಿ ಅರಣ್ಯ ಪ್ರವೇಶಿಸಿ ಮರಗಳನ್ನು ಕಡಿಯುತ್ತಿದ್ದ ವೇಳೆ ಕೊರಕಲಾಡಿ ಶಿಬಿರದಲ್ಲಿ ವಾಸ್ತವ್ಯ ಹೂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಶಬ್ದ ಕೇಳಿ ಪರಿಶೀಲನೆ ನಡೆಸಿದಾಗ. ಶ್ರೀಗಂಧದ ಮರಗಳನ್ನು ಕಡಿದಿರುವುದು ಗಮನಕ್ಕೆ ಬಂದಿತ್ತು. ಆರೋಪಿಗಳ ಪತ್ತೆಗೆ ಶೋಧ ನಡೆಸಿದ ಸಂದರ್ಭ ಹೆಡಿಯಾಲದ ಕುದುರೆ ಗುಂಡಿ ಡ್ಯಾಂ ಸಮೀಪ ಮೂರು ದ್ವಿಚಕ್ರ ವಾಹನಗಳು ಜಮೀನಿನಲ್ಲಿ ನಿಂತಿರುವುದು ಕಂಡುಬಂದಿದೆ. ಅರಣ್ಯ ಸಿಬ್ಬಂದಿ ಮೂರೂ ವಾಹನಗಳನ್ನು ವಶಕ್ಕೆ ಪಡೆದಿದ್ದರು. ನಂತರ ಸೆ. 27ರ ಬೆಳಗ್ಗೆ ವಾಹನಗಳನ್ನು ವಶಪಡಿಸಿಕೊಂಡಿದ್ದ ಸ್ಥಳಕ್ಕೆ ಬಂದ ಕೆಲವರು ನಾವುಗಳು ರಾತ್ರಿ ಜೇನು ಕೀಳಲೆಂದು ಬಂದಿದ್ದು, ರಾತ್ರಿ ಸಮಯವಾದ್ದರಿಂದ ಜಮೀನಿನಲ್ಲಿ ಬೈಕ್ಗಳನ್ನು ನಿಲ್ಲಿಸಿದ್ದೆವು. ನಮ್ಮ ವಾಹನಗಳನ್ನು ವಾಪಸ್ ಕೊಡಿ ಎಂದು ಕೇಳಿದ್ದಾರೆ. ಪ್ರತ್ಯೇಕವಾಗಿ ನಾಲ್ಕೂ ಜನರನ್ನು ವಿಚಾರಣೆಗೊಳಪಡಿಸಿದ ನಂತರ. ಶ್ರೀಗಂಧದ ಮರ ಕಡಿದಿದ್ದರಲ್ಲಿ ಭಾಗಿಯಾಗಿರುವುದು ಧೃಡಪಟ್ಟಿದೆ.