ಈ ಕುರಿತು ‘ಪ್ರಜಾವಾಣಿ’ ಜತೆ ಮಾತಿಗಿಳಿದ ಸ್ಥಳೀಯ ನಿವಾಸಿ ವಾಸುದೇವರಾಜು, ‘ಎಸ್ಬಿಎಂ ಕಾಲೊ ನಿಯಲ್ಲಿ ಇರುವ ಬಹುತೇಕ ಮಂದಿ ಬ್ಯಾಂಕ್ ನೌಕರಿಯಿಂದ ನಿವೃತ್ತರಾದವರು. ಸುಮಾರು 220 ಮಂದಿ ಇಲ್ಲಿದ್ದಾರೆ. ಇವರೆಲ್ಲರೂ ನಿವೃತ್ತ ಜೀವನವನ್ನು ಸುಖವಾಗಿ ಕಳೆಯಲೆಂದು ಇಲ್ಲಿ ಮನೆ ನಿರ್ಮಿಸಿಕೊಂಡವರು. ಆದರೆ, ‘ಮುಡಾ’ಗೆ ಸೇರಿದ ಈ ಜಾಗದಿಂದಾಗಿ ಹೊರಹೊಮ್ಮುವ ದೂಳು, ಶಬ್ದಗಳಿಂದ ಬಳಲಿ ಹೋಗಿದ್ದಾರೆ. ಅಸ್ತಮಾ ಇದ್ದವರಂತೂ ನರಕಯಾತನೆ ಪಡುವಂತಾಗಿದೆ’ ಎಂದು ದೂರುತ್ತಾರೆ.