ಇಂಡಿಯಾ ಸೈನ್ಸ್ ವೈರ್ ಸಂಸ್ಥೆಯ ನಿರ್ವಹಣಾ ಸಂಪಾದಕ ದಿನೇಶ್ ಸಿ.ಶರ್ಮಾ ಮಾತನಾಡಿ, ‘ನಮ್ಮಲ್ಲಿ ಕೆಲವು ವಿರೋಧಾಭಾಸಗಳಿವೆ. ಅವುಗಳೆಂದರೆ ಚಂದ್ರಯಾನ, ಮಂಗಳಯಾನದಿಂದ ಏನು ಉಪಯೋಗ ? ಪೌರ ಕಾರ್ಮಿಕರು ದುಃಸ್ಥಿತಿಯಲ್ಲಿದ್ದಾರೆ ಎನ್ನುವ ಆರೋಪದ ಬದಲು; ವಿಜ್ಞಾನವನ್ನು ಜನ ಸಾಮಾನ್ಯರಿಗೆ ತಲುಪಿಸಲು ಪ್ರಯತ್ನಿಸಬೇಕು. ಸಂವಹನ ವಿಜ್ಞಾನದ ಮೂಲಕ ಅರಿವು ಮೂಡಿಸುವುದರ ಬಗ್ಗೆ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳಬೇಕು’ ಎಂದರು.