ವಿಚಾರಣೆ ಸಮಯದಲ್ಲಿ ದೂರು ನೀಡಿದ ಬಾಲಕಿಯ ತಾಯಿ ಹಾಗೂ ನೊಂದ ಮೂವರೂ ಬಾಲಕಿಯರು ಘಟನೆ ನಡೆದೇ ಇಲ್ಲ ಎಂದು ಹೇಳಿದರು. ಆದರೆ, ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು ತನಿಖಾ ಕಾಲದಲ್ಲಿ ನೊಂದ ಬಾಲಕಿಯರು ಮಹಿಳಾ ಪೊಲೀಸ್ ಅಧಿಕಾರಿ ಮುಂದೆ, ವೈದ್ಯಕೀಯ ಪರೀಕ್ಷೆ ಸಮಯದಲ್ಲಿ ವೈದ್ಯರಿಗೆ ಹಾಗೂ ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಗಳನ್ನು ಪರಿಗಣಿಸಿದರು. ಜತೆಗೆ, ವೈದ್ಯರು ಮತ್ತು ಪೊಲೀಸರ ಸಾಕ್ಷ್ಯಾಧಾರಗಳನ್ನು ಗಣನೆಗೆ ತೆಗೆದುಕೊಂಡು ಈ ಶಿಕ್ಷೆ ವಿಧಿಸಿದ್ದಾರೆ.