ಮೈಸೂರು: ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಸೋಮವಾರ ಇಲ್ಲಿನ ಅವಧೂತ ದತ್ತಪೀಠದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.
ಆ. 17ರಂದು ಅವರು ಬೆಳಿಗ್ಗೆ 11 ಗಂಟೆಗೆ ರಿಯೊಮೆರಿಡೆನಿಯನ್ ಹೋಟೆಲ್ನಲ್ಲಿ ಬಿಜೆಪಿಯ ‘ಜನಾಶೀರ್ವಾದ ಯಾತ್ರೆ’ ಸಭೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಅವರು ಚಾಮುಂಡಿಬೆಟ್ಟ ಹಾಗೂ ಸುತ್ತೂರು ಮಠಕ್ಕೆ ಭೇಟಿ ನೀಡುವರು ಎಂದು ಪ್ರಕಟಣೆ ತಿಳಿಸಿದೆ.