ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಎಚ್.ಡಿ.ಕೋಟೆ ಘಟಕದ ಅಧ್ಯಕ್ಷ ಪಾಷಾ ಮಾತನಾಡುವ ವೇಳೆ ಎದ್ದುನಿಂತ ಶಿಂಡೇನಹಳ್ಳಿ ಗ್ರಾಮದ ಯತೀಶ್ ಕುಮಾರ್, ಸಿಂಗೇಗೌಡರ ಸಾವಿಗೆ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಕಾರಣ ಎಂದು ದೂರಿದರು. ಇದರಿಂದ ಸಭೆಯಲ್ಲಿ ಗದ್ದಲ ಆರಂಭವಾಯಿತು. ಸಮಜಾಯಿಷಿ ನೀಡಲು ಬಂದ ಸುರೇಶ್ ಮೇಲೆ ಈರೇಗೌಡ ಹಲ್ಲೆ ನಡೆಸಿದರು. ಮಧ್ಯಪ್ರವೇಶಿಸಿದ ಅನಿಲ್ಕುಮಾರ್ ಇಬ್ಬರನ್ನು ಸಮಾಧಾನಪಡಿಸಿದರು. ಈ ಕುರಿತು ಪಟ್ಟಣ ಠಾಣೆಯಲ್ಲಿ ಸುರೇಶ್ ದೂರು ನೀಡಿದ್ದಾರೆ. ಪ್ರಕರಣ ಇನ್ನೂ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.