ಕಾರ್ಯಾಧ್ಯಕ್ಷ ರವಿಶಾಸ್ತ್ರಿ ಮಾತನಾಡಿ, ‘ಈ ಚಾತುರ್ಮಾಸ್ಯದ ನಿಮಿತ್ತ ಉಚಿತ ವೈದ್ಯಕೀಯ ತಪಾಸಣೆ, ಪ್ರತಿದಿನ 50 ರಿಂದ 60ಜನರಿಗೆ ಕಣ್ಣು ತಪಾಸಣೆ, ದಂತ ಚಿಕಿತ್ಸೆಯನ್ನು ನೀಡಲಾಗುವುದು. ಕಾವೇರಿ, ನಾರಾಯಣ ಆಸ್ಪತ್ರೆಗಳ ಸಹಯೋಗದೊಂದಿಗೆ ಆರೋಗ್ಯ ಚಿಕಿತ್ಸೆಯನ್ನು ಹಮ್ಮಿಕೊಂಡಿದ್ದು, 20,000 ಮಕ್ಕಳಿಗೆ ಉಚಿತ ಚಿಕಿತ್ಸೆ, ರಕ್ತದಾನ ಶಿಬಿರ ಏರ್ಪಡಿಸಿ 810 ಬಾಟಲಿಗಳಷ್ಟು ರಕ್ತ ಸಂಗ್ರಹಿಸಿ ಉಚಿತವಾಗಿ ಆಸ್ಪತ್ರೆಗೆ ನೀಡಲಾಗುವುದು ಎಂದರು.