ಸದನದಲ್ಲಿ ಸಿದ್ದರಾಮಯ್ಯ ಜಾತಿಗಣತಿ ವರದಿ ಕುರಿತು ಮಾತನಾಡಲಿಲ್ಲ. ಅವರೇನು ಬಾಯಿಯಲ್ಲಿ ಕಡುಬು ಇಟ್ಟುಕೊಂಡಿದ್ದರಾ ಎಂದು ಪ್ರಶ್ನಿಸಿದ ಅವರು, ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಜಾತಿಗಣತಿ ವರದಿ ಸಿದ್ದವಾಗಿದ್ದರೂ ಕುಮಾರಸ್ವಾಮಿ ಮಂಡಿಸಲಿಲ್ಲ. ಆಗ ನಿಮ್ಮ ಬೆಂಬಲ ವಾಪಸ್ ತೆಗೆದುಕೊಳ್ಳಬೇಕಿತ್ತು. ಇವರಿಗೆ ಜಾತಿಗಣತಿ ವರದಿ ಮುಖ್ಯವಲ್ಲ. ಕೇವಲ ಅಧಿಕಾರವೊಂದೇ ಗುರಿ ಎಂದು ಹೇಳಿದರು.