ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉಪ ಸಮಿತಿಗಳಿಗೆ ಉಪ ವಿಶೇಷಾಧಿಕಾರಿ, ಕಾರ್ಯಾಧ್ಯಕ್ಷರು ಹಾಗೂ ಕಾರ್ಯದರ್ಶಿ ನೇಮಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಶನಿವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮಿತಿಗಳನ್ನು ರಚಿಸಲಾಯಿತು.
ಸಮಿತಿಗಳಿಗೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನೂ ಸೇರಿಸುವಂತೆ ಜನಪ್ರತಿನಿಧಿಗಳಿಂದ ಸಲಹೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಸಮಿತಿ ಹೆಸರು;ಉಪವಿಶೇಷಾಧಿಕಾರಿ;ಕಾರ್ಯಾಧ್ಯಕ್ಷರು;ಕಾರ್ಯದರ್ಶಿ
ಸ್ವಾಗತ, ಆಮಂತ್ರಣ ಮತ್ತು ಸ್ಥಳಾವಕಾಶ;ಡಾ.ಬಿ.ಎಸ್.ಮಂಜುನಾಥಸ್ವಾಮಿ;ಎಂ.ಜೆ.ರೂಪಾ;ಕಮಲಾಬಾಯಿ;ನಾಗೇಶ್ ಮತ್ತು ಗಿರೀಶ್
ಮೆರವಣಿಗೆ ಮತ್ತು ಪಂಜಿನ ಕವಾಯತು;ಡಾ.ಚಂದ್ರಗುಪ್ತ;ಎಂ.ಎಸ್.ಗೀತಾ ಮತ್ತು ಶಿವರಾಜ್;ಶಶಿಧರ್, ಡಾ.ಎಂ.ಡಿ.ಸುದರ್ಶನ್, ಶಿವಶಂಕರ್ ಹಾಗೂ ಶಿವಣ್ಣ.