‘ಆ ಮೂರ್ತಿಯನ್ನು ಹಾಲಿನಲ್ಲಿ ವಿಸರ್ಜಿಸಲಿದ್ದೇನೆ. ಆ ಚಾಕೊಲೇಟ್ ಹಾಲನ್ನು ತಿಲಕ್ನಗರದ ವಾಕ್ ಮತ್ತು ಶ್ರವಣ ದೋಷವುಳ್ಳವರ ಶಾಲೆ ಮಕ್ಕಳಿಗೆ ಹಾಗೂ ಮೇಟಗಳ್ಳಿಯ ಅನಾಥಾಶ್ರಮದ ನಿವಾಸಿಗಳಿಗೆ ವಿತರಿಸಲಿದ್ದೇನೆ. ಜಲ ಮೂಲಗಳನ್ನು ಕಲುಷಿತಗೊಳಿಸಬಾರದು ಎಂಬ ಕಾರಣಕ್ಕೆ ಪರಿಸರ ಸ್ನೇಹಿಯಾದ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಘ್ನ ನಿವಾರಕ ಗಣೇಶನನ್ನು ಪೂಜಿಸಿದ್ದೆ’ ಎನ್ನುತ್ತಾರೆ ಚೈತ್ರಾ.