ಪ್ಯಾಕೇಜ್ನಲ್ಲಿ ಏನಿದೆ?:
ರಾಜ್ಯದಲ್ಲಿರುವ 177 ತಾಲ್ಲೂಕುಗಳನ್ನು ಅವಲೋಕಿಸಿ ವಿವಿಧ ಬೇಡಿಕೆಗಳನ್ನು ಪಟ್ಟಿ ಮಾಡಿದ್ದು ಕೃಷಿ ಸಂಕಷ್ಟವನ್ನು ಬಗೆಹರಿಸಬೇಕು, ಗ್ರಾಮೀಣ ಪ್ರದೇಶಕ್ಕೆ ಮೂಲ ಸೌಕರ್ಯಗಳನ್ನು ನೀಡಬೇಕು, ಗ್ರಾಮೀಣ ಪ್ರದೇಶಗಳು ಸ್ವಾವಲಂಬಿಯಾಗಬೇಕು, ಗ್ರಾಮೀಣ ಮಾರುಕಟ್ಟೆಗಳು ಅಭಿವೃದ್ದಿಯಾಗಬೇಕು, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿ ಸ್ವಾವಲಂಬಿ ಹಾಗೂ ಕೃಷಿ ಪೂರಕ ಉದ್ಯೋಗ ಸೃಷ್ಟಿಸಿಕೊಳ್ಳುವಂತೆ ಮಾಡಬೇಕು, ಶಿಕ್ಷಣ ತಾರತಮ್ಯ ಹೋಗಲಾಡಿಸಬೇಕು ಎಂಬುದು ವಿಶೇಷ ಪ್ಯಾಕೇಜ್ನ ಪ್ರಮುಖ ಅಂಶಗಳು ಎಂದು ಮಾಹಿತಿ ನೀಡಿದರು.