ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಚಾಮುಂಡಿ ಬೆಟ್ಟದಲ್ಲಿ ನಡೆಯುವ ನಾಡಹಬ್ಬ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಬರಲಿದ್ದಾರೆ. ಅವರು, ಅರಮನೆಗೆ ಭೇಟಿ ಕೊಡುತ್ತಾರೆಯೇ ಎಂದು ಕೇಳಲಾಗಿದೆ. ಆ ಬಗ್ಗೆ ರಾಷ್ಟ್ರಪತಿ ಕಚೇರಿಯಿಂದ ಇನ್ನೂ ಮಾಹಿತಿ ಬಂದಿಲ್ಲ. ಉದ್ಘಾಟನೆ ಕಾರ್ಯಕ್ರಮಕ್ಕೆ ಕೇಂದ್ರದ ನಾಲ್ವರು ಸಚಿವರು ಬರುವ ಸಾಧ್ಯತೆ ಇದೆ’ ಎಂದರು.