‘ಬೆಟ್ಟದಲ್ಲಿ ಹೊಸ ಮನೆಗಳ ನಿರ್ಮಾಣಕ್ಕೆ ನಿಯಂತ್ರಣ ಹೇರಲಾಗುತ್ತದೆಯೇ ಹೊರತು, ಅಲ್ಲಿನ ಜನರನ್ನ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ. ಪ್ರಸ್ತುತ ಇರುವ ಯಾವ ಮನೆಗಳನ್ನೂ ತೆರವುಗೊಳಿಸಲು ನಿರ್ಧರಿಸಿಲ್ಲ. ಅಂಥ ನಿರ್ಧಾರಗಳನ್ನು ಮುಂದೆಯೂ ನಾವು ಕೈಗೊಳ್ಳುವುದಿಲ್ಲ. ಹೊಸ ಮನೆಗಳ ನಿರ್ಮಾಣಕ್ಕೆ ಚಾಮುಂಡಿ ಬೆಟ್ಟ ಪಾದದ ಬಳಿ ನಾಲ್ಕೈದು ಎಕರೆ ಜಾಗ ನಿಗದಿಪಡಿಸುತ್ತೇವೆ. ಅದಕ್ಕೆ ಚಾಮುಂಡೇಶ್ವರಿ ಬಡವಾಣೆ ಎಂದು ಹೆಸರಿಡುತ್ತೇವೆ. ಮುಂದೆ ಚಾಮುಂಡಿ ಬೆಟ್ಟದಲ್ಲಿ ಯಾರಿಗಾದರೂ ಮನೆಗಳ ಅವಶ್ಯಕತೆ ಬಿದ್ದರೆ ನಿರ್ಮಿಸಲು ಆ ಬಡಾವಣೆಯಲ್ಲಿ ನಿವೇಶನ ನೀಡಲಾಗುವುದು’ ಎಂದು ತಿಳಿಸಿದ್ದಾರೆ.