ಪಶುಸಂಗೋಪನಾ ಇಲಾಖೆ ಹುಣಸೂರು ವಿಭಾಗದ ಸಹಾಯಕ ನಿರ್ದೇಶಕ ಡಾ.ದೊಡ್ಡಮನಿ ಹೊಸಮಠ್ ಮಾತನಾಡಿ, ‘ಕುರಿಗಳ ಮಾಲೀಕ ಅನಿಲ್ ಗೌಡ ತನ್ನ ಫಾರಂನಲ್ಲಿ ಸಾಕಿರುವ 40 ಕುರಿಗಳಲ್ಲಿ ಕೆಲ ಕುರಿಗೆ ಹೊಟ್ಟೆ ಉಬ್ಬರಿಸಿಕೊಂಡಿದೆ ಎಂದು ನೀಡಿದ ದೂರಿನ ಮೇಲೆ ತಕ್ಷಣ ಬಿಳಿಕೆರೆ ಪಶುವೈದ್ಯಾಧಿಕಾರಿಗಳ ತಂಡದೊಂದಿಗೆ ಮಧ್ಯಾಹ್ನ 3 ಗಂಟೆಗೆ ಬಂದು ತುರ್ತು ಚಿಕಿತ್ಸೆ ನೀಡಿದ್ದೇವೆ. ಆದರೂ ಕುರಿಗಳು ಸಾವನ್ನಪ್ಪಿವೆ’ ಎಂದು ಹೇಳಿದರು.