ಒಂದು ಕಡೆ ನೀರಿನ ಸಮಸ್ಯೆಯಾದರೆ ಮತ್ತೊಂದು ಕಡೆ ಊಟದ ಸಮಸ್ಯೆ ಕಾಡುತ್ತಿದೆ. ಮೆನುವಿನ ಪ್ರಕಾರ ಊಟ ಮತ್ತು ತಿಂಡಿಯನ್ನು ನೀಡುತ್ತಿಲ್ಲ. ಅಡುಗೆಯವರನ್ನು ಕೇಳಿದರೆ ವಾರ್ಡನ್ ಆಹಾರ ಪದಾರ್ಥ ನೀಡಿಲ್ಲ ಎನ್ನುತ್ತಾರೆ. ವಾರ್ಡನ್ ಅವರನ್ನು ಕೇಳಿದರೆ ಅಡುಗೆಯವರಿಗೆ ಆಹಾರ ಪದಾರ್ಥ ನೀಡಲಾಗಿದೆ ಎಂದು ಹೇಳುತ್ತಾರೆ. ಆಹಾರ ಪದಾರ್ಥಗಳನ್ನು ಯಾರು ಯಾರಿಗೆ ನೀಡಿದ್ದಾರೆಯೋ ಗೊತ್ತಿಲ್ಲ. ಆದರೆ, ನಮಗಂತೂ ಮೆನು ಪ್ರಕಾರ ಊಟ ಸಿಗುತ್ತಿಲ್ಲ ಎಂದು ದೂರಿದರು.