ಮೈಸೂರು: ತಿ.ನರಸೀಪುರ ತಾಲ್ಲೂಕಿನ ಕೆಂಪೇಗೌಡನಕೊಪ್ಪಲು ಗ್ರಾಮದಲ್ಲಿ ದಾಯಾದಿಗಳ ಕಲಹದಿಂದ ಜಮೀನಿನಲ್ಲಿನ ಕಬ್ಬು ಬೆಳೆ ನಾಶವಾಗಿದೆ.
ಕೆಂಪೇಗೌಡನಕೊಪ್ಪಲಿನ ಸಿದ್ದಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿನ ಕಬ್ಬನ್ನು ಹೊಂಬೇಗೌಡ ಮತ್ತು ಸಹಚರರು ಕತ್ತರಿಸಿ ಹಾಕಿದ್ದಾರೆ ಎಂಬ ದೂರು ಬನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂಬುದು ತಿಳಿದು ಬಂದಿದೆ.
14 ಗುಂಟೆ ಜಮೀನಿನಲ್ಲಿದ್ದ ಕಬ್ಬನ್ನು ಸಂಪೂರ್ಣವಾಗಿ ಕೊಚ್ಚಿ ಹಾಕಲಾಗಿದೆ ಎನ್ನಲಾಗಿದೆ.