ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮುಂಗಾರಿಗಿಂತ ಮುಂಗಾರುಪೂರ್ವ ದಲ್ಲೇ ಹೆಚ್ಚು ಮಳೆಯಾಗುತ್ತಿತ್ತು. ಯುಗಾದಿಗೂ ಮುನ್ನವೇ ಫೆಬ್ರುವರಿಯಲ್ಲಿ ಒಂದು ಬಾರಿ, ಯುಗಾದಿ ಸನಿಹದಲ್ಲಿ ಮತ್ತೊಂದೆರಡು ಬಾರಿ ಮಳೆ ಬಿದ್ದು ಬೇಸಿಗೆಯ ತಾಪಮಾನ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ, ಈ ಬಾರಿ ಮುಂಗಾರುಪೂರ್ವದಲ್ಲಿ ಉತ್ತಮ ಎಂದು ಹೇಳಬಹುದಾದ ಮಳೆಯಾಗಿಲ್ಲ. ಇದು ತಾಪಮಾನ ಏರಿಕೆಗೆ ಕಾರಣವಾಗಿದೆ.