ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಕೈಗಾರಿಕಾ ಪ್ರದರ್ಶನ, ಆಹಾರ ಮೇಳ, ದೇಸಿ ಆಟೋಟ, ದೋಣಿ ವಿಹಾರ, ರಂಗೋಲಿ, ಸೋಬಾನೆ ಸ್ಪರ್ಧೆಗಳಿಗೂ ವಿಧ್ಯುಕ್ತ ಚಾಲನೆ ದೊರೆತಿದ್ದು, ಸುತ್ತೂರಿನಲ್ಲಿ ಜಾತ್ರೆಯ ಆರು ದಿನವೂ ದೇಸಿಯ ಗತ ವೈಭವ ಮರುಕಳಿಸಲಿದೆ. ಇದನ್ನು ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿದಂತೆ ನಾಡಿನ ವಿವಿಧೆಡೆಯಿಂದ ಭಕ್ತ ಸಾಗರವೇ ಜಮಾಯಿಸುತ್ತಿದೆ.