ಮೈಸೂರು: ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ಗೆ ಸದಸ್ಯರ ನೇಮಿಸಿ ಶಿಕ್ಷಣ ಇಲಾಖೆ (ವಿಶ್ವವಿದ್ಯಾನಿಲಯಗಳು–2) ಆದೇಶ ಹೊರಡಿಸಿದೆ.
ಬೆಂಗಳೂರಿನ ಎಸ್.ಟಿ.ರಾಮಚಂದ್ರ ಸೇರಿದಂತೆ ಮೈಸೂರಿನ ಪ್ರೊ.ಎಚ್.ಎಲ್.ವೆಂಕಟೇಶ್, ಡಾ.ಎನ್.ಸರಸ್ವತಿ, ಪ್ರೊ.ಶಬ್ಬೀರ್ ಮಹಮ್ ಮುಸ್ತಾಫಾ, ಡಾ.ಪಿ.ಮಂಜುನಾಥ, ದಯಾಶಂಕರ ಮೈಲಿ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ರಾಜ್ಯದ ವಿವಿಧೆಡೆಯಿರುವ ವಿಶ್ವವಿದ್ಯಾಲಯಗಳಿಗೆ ಮೈಸೂರಿನವರು ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದು, ವಿವರ ಇಂತಿದೆ.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನಂಜನಗೂಡು ತಾಲ್ಲೂಕಿನ ಸರಗೂರಿನ ಡಾ.ಎಸ್.ಸಿ.ಬಸವರಾಜು, ಮೈಸೂರಿನ ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ವಿ.ಆಶಾ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಡಾ.ರೂಬಿ ಸಲೆಸ್ಟಿನ್ ಎಂ ನೇಮಕವಾಗಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯಕ್ಕೆ ಡಾ.ಚೇತನ್ ಎಚ್.ಕೆ, ಕೆ.ಎಸ್.ಶಿವರಾಮ್, ತುಮಕೂರು ವಿಶ್ವವಿದ್ಯಾಲಯಕ್ಕೆ ಡಾ.ಎನ್.ಲಕ್ಷ್ಮೀ, ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ಗೆ ಡಾ.ವಸಂತ್ಕುಮಾರ್ ತಿಮಕಾಪುರ ಸದಸ್ಯರಾಗಿ ನೇಮಕಗೊಂಡಿದ್ದಾರೆ.