<p><strong>ಮೈಸೂರು:</strong> ಇಲ್ಲಿನ ಟೇಲರ್ ರವಿನಾಯಕ್ ಅವರು ಹೊಲಿಗೆ ಕೌಶಲದ ಮೂಲಕ ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ಭಾವಚಿತ್ರವನ್ನು ಮೂಡಿಸಿ ಅಭಿಮಾನ ಮೆರೆದಿದ್ದಾರೆ.</p>.<p>ಕೆ.ಆರ್.ಮೊಹಲ್ಲಾದ ಭಾವಸಾರ್ ಕ್ಷತೀಯ ಸೇವಾ ಸಮಿತಿಯು ರವಿನಾಯಕ್ ಅವರು ಹೊಲಿದ ಭಾವಚಿತ್ರವನ್ನು ಉಡುಗೊರೆಯಾಗಿ ಮುಖಂಡ ಸೋಮಶೇಖರ್ ಅವರಿಗೆ ಗುರುವಾರ ನೀಡಿದೆ.</p>.<p>‘ಸೋಮಶೇಖರ್ ಅವರ ಕಾರ್ಯವೈಖರಿ, ಸೇವಾ ಮನೋಭಾವ, ಸರಳತೆಗೆ ಮನಸೋತಿದ್ದೇನೆ. ಬಟ್ಟೆಯಲ್ಲಿ ನನ್ನ ಹೊಲಿಗೆ ಯಂತ್ರದ ಮೂಲಕ ನೂಲಿನ ಚಿತ್ರ ಬರೆದಿದ್ದೇನೆ’ ಎಂದು ರವಿನಾಯಕ್ ಹೇಳಿದರು.</p>.<p>ಅಭಿಮಾನಿಯ ಉಡುಗೊರೆ ಸ್ವೀಕರಿಸಿದ ಸೋಮಶೇಖರ್ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭ ಮುಖಂಡರಾದ ಚಂದ್ರಶೇಖರ್ ಪತಂಗೆ, ಶಾಂತರಾಮ್ ಸಿಂಟ್ರೆ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಇಲ್ಲಿನ ಟೇಲರ್ ರವಿನಾಯಕ್ ಅವರು ಹೊಲಿಗೆ ಕೌಶಲದ ಮೂಲಕ ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ಭಾವಚಿತ್ರವನ್ನು ಮೂಡಿಸಿ ಅಭಿಮಾನ ಮೆರೆದಿದ್ದಾರೆ.</p>.<p>ಕೆ.ಆರ್.ಮೊಹಲ್ಲಾದ ಭಾವಸಾರ್ ಕ್ಷತೀಯ ಸೇವಾ ಸಮಿತಿಯು ರವಿನಾಯಕ್ ಅವರು ಹೊಲಿದ ಭಾವಚಿತ್ರವನ್ನು ಉಡುಗೊರೆಯಾಗಿ ಮುಖಂಡ ಸೋಮಶೇಖರ್ ಅವರಿಗೆ ಗುರುವಾರ ನೀಡಿದೆ.</p>.<p>‘ಸೋಮಶೇಖರ್ ಅವರ ಕಾರ್ಯವೈಖರಿ, ಸೇವಾ ಮನೋಭಾವ, ಸರಳತೆಗೆ ಮನಸೋತಿದ್ದೇನೆ. ಬಟ್ಟೆಯಲ್ಲಿ ನನ್ನ ಹೊಲಿಗೆ ಯಂತ್ರದ ಮೂಲಕ ನೂಲಿನ ಚಿತ್ರ ಬರೆದಿದ್ದೇನೆ’ ಎಂದು ರವಿನಾಯಕ್ ಹೇಳಿದರು.</p>.<p>ಅಭಿಮಾನಿಯ ಉಡುಗೊರೆ ಸ್ವೀಕರಿಸಿದ ಸೋಮಶೇಖರ್ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭ ಮುಖಂಡರಾದ ಚಂದ್ರಶೇಖರ್ ಪತಂಗೆ, ಶಾಂತರಾಮ್ ಸಿಂಟ್ರೆ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>