ಆದರೆ ಆತುರ ಸಲ್ಲದು. ಇದಕ್ಕಿಂತ ಘೋರ ಅನ್ಯಾಯಕ್ಕೊಳಗಾದವರು ನಮ್ಮ ಕಾಲಮಾನದಲ್ಲೇ ಆಗಿ ಹೋದವರಿದ್ದಾರೆ. ಉಳುವವನಿಗೆ ಭೂಮಿ, ದಲಿತರ ಮೀಸಲಾತಿ, ಖಾಸಗಿ ಸಾಲ ಮನ್ನಾ ಇತ್ಯಾದಿ ಪ್ರಗತಿಪರ ಕಾನೂನುಗಳನ್ನು ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು 1980ರ ದಶಕದಲ್ಲಿ ಕಾಂಗ್ರೆಸ್ನಲ್ಲಿದ್ದ ಇಂದಿರಾ ಬ್ರಿಗೇಡ್ನ ಶಾಸಕರ ಗುಂಪು ಗುಂಡೂರಾವ್ ನಾಯಕತ್ವದಲ್ಲಿ ದಿನಬೆಳಗಾಗುವುದರೊಳಗೆ ಪದಚ್ಯುತಿಗೊಳಿಸಿದ್ದು ಇತಿಹಾಸ. ಅದೇ ಜನರು ಈಗ ಅರಸರನ್ನು ‘ನವ ಕರ್ನಾಟಕದ ನಿರ್ಮಾಪಕ’ ಎಂದು ಕೊಂಡಾಡುತ್ತಿದ್ದಾರೆ. ಕಾಲಚಕ್ರ ತಿರುಗುತ್ತದೆ.