‘ಎಸ್ಐಟಿ ತನಿಖೆ ನಡೆದಿದೆ. ಸಿ.ಡಿ. ಪ್ರಕರಣದ ಸ್ಕ್ರಿಪ್ಟ್ ರೈಟರ್ ಯಾರು? ಪ್ರೊಡ್ಯೂಸರ್ ಯಾರು? ಲೋಕೇಷನ್ ಎಲ್ಲಿಯದ್ದು? ಎಂಬುದು ಗೊತ್ತಾಗಬೇಕಿದೆ. ರಮೇಶ ಜಾರಕಿಹೊಳಿ ನಕಲಿ ಎಂದಿದ್ದಾರೆ. ಸಂತ್ರಸ್ತೆ ಗ್ರಾಫಿಕ್ಸ್ ಅಂದಿದ್ದಾರೆ. ದೇಶದಲ್ಲೇ ಕರ್ನಾಟಕ ಪೊಲೀಸರಿಗೆ ಒಳ್ಳೆಯ ಹೆಸರಿದೆ. ಯಾವ ಪ್ರಭಾವಕ್ಕೂ ಮಣಿಯದೆ ಸತ್ಯಾಂಶವನ್ನು ಪತ್ತೆ ಹಚ್ಚಲಿದ್ದಾರೆ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸೋಮಶೇಖರ್ ಪ್ರತಿಕ್ರಿಯಿಸಿದರು.