ರಾಜೀವನಗರದ ನಿವಾಸಿ ಮುನಾವರ್ ಪಾಷಾ ನಗರದ ಟಿಎಎಂ ವೃತ್ತದಲ್ಲಿ ಮಾಂಸದಂಗಡಿ ನಡೆಸುತ್ತಿದ್ದಾರೆ. ಇವರು ಮಂಗಳವಾರ ಹೊಳೆನರಸೀಪುರದ ಸಂತೆಯಲ್ಲಿ 5 ಕುರಿಗಳನ್ನು (₹ 45 ಸಾವಿರ ಮೌಲ್ಯ) ಖರೀದಿಸಿ ತಂದು, ತಮ್ಮ ಮನೆಯ ಬಳಿ ಮೇಯಲು ಬಿಟ್ಟಿದ್ದರು. ಈ ವೇಳೆ ಅಕ್ಲಂ ಜಾಣತನದಿಂದ ಕುರಿಗಳನ್ನು ಕಳ್ಳತನ ಮಾಡಿ ಆಟೊವೊಂದರಲ್ಲಿ ಹಾಕಿಕೊಂಡು ಪರಾರಿಯಾಗಿದ್ದ. ನಂತರ, ಪಾಷಾ ಅವರು ಮೇಯಲು ಬಿಟ್ಟ ಸ್ಥಳಕ್ಕೆ ಬಂದು ನೋಡಿದಾಗ ಕುರಿಗಳು ಕಳವಾಗಿರುವುದು ತಿಳಿದು ಬಂದಿದೆ. ಬಳಿಕ ಅವರು ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಮರುದಿನವೇ ಕಳ್ಳನ ಪತ್ತೆಗೆ ಬಲೆ ಬೀಸಿದ ಎನ್.ಆರ್.ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.