ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ಮುರಿದು ಸರ ದೋಚಿದ ಕಳ್ಳರು

ನಂಜನಗೂಡು ಪಟ್ಟಣದಲ್ಲಿ ಕಳ್ಳತನ– ಆತಂಕ
Last Updated 9 ಮೇ 2019, 9:10 IST
ಅಕ್ಷರ ಗಾತ್ರ

ನಂಜನಗೂಡು: ಪಟ್ಟಣದ ತಮ್ಮಡಗೇರಿ ಬಡಾವಣೆಯಲ್ಲಿ ಮಂಗಳವಾರ ತಡರಾತ್ರಿ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಾವಲುಗಾರ ರವಿಕುಮಾರ್ ಅವರ ಮನೆಯ ಹಿತ್ತಲ ಬಾಗಿಲು ಮುರಿದು ಮನೆ ಪ್ರವೇಶಿಸಿದ ಕಳ್ಳರು 40 ಗ್ರಾಂ ತೂಕದ ₹ 1.2 ಲಕ್ಷ ಮೌಲ್ಯದ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದಾರೆ.

ರವಿಕುಮಾರ್ ಅವರು ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ ವೇಳೆ ಇಬ್ಬರು ಕಳ್ಳರು ಈ ಕೃತ್ಯ ಎಸಗಿದ್ದಾರೆ. ಬಾಗಿಲು ಮುರಿಯುವ ಸದ್ದಿಗೆ ಎಚ್ಚರಗೊಂಡ ರವಿಕುಮಾರ್ ತಾಯಿ ನಾಗರತ್ನಮ್ಮ ಹಾಗೂ ಪತ್ನಿ ಕವಿತಾಕುಮಾರಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ನಾಗರತ್ನಮ್ಮ ಅವರ ಚಿನ್ನದ ಸರ ಭಾಗಶಃ ತುಂಡಾಗಿ ಉಳಿದುಕೊಂಡಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಸಿಪಿಐ ಶೇಖರ್ ತಿಳಿಸಿದ್ದಾರೆ.

ಕುರಿ ಕಳ್ಳನ ಬಂಧನ
ಮೈಸೂರು:
ಮೇಯಲು ಬಿಟ್ಟಿದ್ದ 5 ಕುರಿಗಳನ್ನು ಕಳವು ಮಾಡಿದ್ದ ಶಾಂತಿನಗರದ ಮಹದೇವಪುರ ರಸ್ತೆ ಬಳಿಯ ನಿವಾಸಿ ಸಯ್ಯದ್ ಅಕ್ಲಂ (26) ಎಂಬ ಆರೋಪಿಯನ್ನು ಎನ್.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜೀವನಗರದ ನಿವಾಸಿ ಮುನಾವರ್ ಪಾಷಾ ನಗರದ ಟಿಎಎಂ ವೃತ್ತದಲ್ಲಿ ಮಾಂಸದಂಗಡಿ ನಡೆಸುತ್ತಿದ್ದಾರೆ. ಇವರು ಮಂಗಳವಾರ ಹೊಳೆನರಸೀಪುರದ ಸಂತೆಯಲ್ಲಿ 5 ಕುರಿಗಳನ್ನು (₹ 45 ಸಾವಿರ ಮೌಲ್ಯ) ಖರೀದಿಸಿ ತಂದು, ತಮ್ಮ ಮನೆಯ ಬಳಿ ಮೇಯಲು ಬಿಟ್ಟಿದ್ದರು. ಈ ವೇಳೆ ಅಕ್ಲಂ ಜಾಣತನದಿಂದ ಕುರಿಗಳನ್ನು ಕಳ್ಳತನ ಮಾಡಿ ಆಟೊವೊಂದರಲ್ಲಿ ಹಾಕಿಕೊಂಡು ಪರಾರಿಯಾಗಿದ್ದ. ನಂತರ, ಪಾಷಾ ಅವರು ಮೇಯಲು ಬಿಟ್ಟ ಸ್ಥಳಕ್ಕೆ ಬಂದು ನೋಡಿದಾಗ ಕುರಿಗಳು ಕಳವಾಗಿರುವುದು ತಿಳಿದು ಬಂದಿದೆ. ಬಳಿಕ ಅವರು ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಮರುದಿನವೇ ಕಳ್ಳನ ಪತ್ತೆಗೆ ಬಲೆ ಬೀಸಿದ ಎನ್.ಆರ್‌.ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT