ಮೈಸೂರು: ರಾಜ್ಯ ಗುಪ್ತ ವಾರ್ತೆಯ (ಗುಪ್ತದಳದ) ಪಿಎಸ್ಐ ಮನೆಯಲ್ಲೇ ಚಿನ್ನಾಭರಣ, ₹ 20 ಸಾವಿರ ನಗದು ಕಳವಾಗಿದೆ.
ವಿಜಯನಗರ ನಾಲ್ಕನೇ ಹಂತದ ನಿವಾಸಿ ಬಸವರಾಜು ಎಂಬುವರ ಮನೆಯಲ್ಲಿಯೇ ಕಳ್ಳತನ ನಡೆದಿರುವುದು.
ಬಸವರಾಜು ಕುಟುಂಬ ಸಮೇತರಾಗಿ ಹೂಟಗಳ್ಳಿಯಲ್ಲಿರುವ ತಮ್ಮ ಮಾವನ ಮನೆಗೆ ಹೋಗಿದ್ದರು. ಅದೇ ದಿನ ರಾತ್ರಿ 9 ಗಂಟೆಗೆ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಮನೆಯ ಬಾಗಿಲ ಡೋರ್ ಲಾಕ್ ಮೀಟಿರುವ ಕಳ್ಳರು, ಒಳನುಗ್ಗಿ ರೂಮಿನ ವಾರ್ಡ್ರೋಬ್ಗಳಲ್ಲಿಟ್ಟಿದ್ದ 40 ಗ್ರಾಂ ಚಿನ್ನ, ₹ 20 ಸಾವಿರ ನಗದು ಕಳವು ಮಾಡಿದ್ದಾರೆ ಎಂದು ವಿಜಯನಗರ ಪೊಲೀಸರು ತಿಳಿಸಿದ್ದಾರೆ.