‘ನಾಲ್ಕೈದು ದಿನಗಳಿಂದ ಚಿರತೆಗಳು ಗ್ರಾಮದ ಹೊರಭಾಗದ ಕೆರೆ ಬಳಿ ಓಡಾಡುತ್ತಿದ್ದವು. ಮನೆಗಳು ಹತ್ತಿರದಲ್ಲೇ ಇವೆ, ಮಕ್ಕಳು ತಿರುಗಾಡುತ್ತಿರುತ್ತಾರೆ. ಹೀಗಾಗಿ, ಆತಂಕದಿಂದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆವು. ಆದರೆ, ಯಾರೂ ಬಂದಿರಲಿಲ್ಲ. ಕೆರೆಯ ಒಂದು ಭಾಗದಲ್ಲಿ ನೀರು ಕಲುಷಿತಗೊಂಡಿದೆ. ಅದನ್ನು ಕುಡಿದು ಮೃತಪಟ್ಟಿರಬಹುದು. ಸತ್ತ ನಾಯಿಯೊಂದನ್ನು ತಿಂದಿವೆ ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.