ತಿಮ್ಮನಹೊಸಹಳ್ಳಿ ಸಮೀಪದ ರಸ್ತೆಯಲ್ಲಿ ವೆಂಕಟೇಗೌಡ ಎಂಬುವವರನ್ನು ಹುಲಿ ಅಟ್ಟಾಡಿಸಿದ್ದು, ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದಾರೆ. ನಂತರ, ಕೆಲವೇ ನಿಮಿಷಗಳಲ್ಲಿ ಸಮೀಪದ ಮಚ್ಚೂರಿನ ಶಿವಣ್ಣ ಎಂಬುವವರ ಕೊಟ್ಟಿಗೆಗೆ ನುಗ್ಗಿ ಅವರ ಪುತ್ರನ ಮೇಲೆರಗಲು ಯತ್ನಿಸಿದೆ. ಹುಲಿ ಕಂಡ ಕೂಡಲೇ ಮನೆಯೊಳಗೆ ಹೋಗಿ ಬಾಲಕ ಬಾಗಿಲು ಹಾಕಿಕೊಂಡಿದ್ದಾನೆ. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 2 ವರ್ಷದ ಕರುವನ್ನು ಕೊಂದು ಎಳೆದೊಯ್ದಿದೆ.