ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಕಚುವಿನಹಳ್ಳಿ ಗ್ರಾಮದ ಚಿಕ್ಕಣ್ಣಯ್ಯ ಎಂಬುವವರ ಹೊಲದಲ್ಲಿ ಹುಲಿ ಮೇಲೆ ದಾಳಿಯಿಂದ ಹಸು ಗಾಯಗೊಂಡಿದೆ.
ಭಾನುವಾರ ಮಧ್ಯಾಹ್ನ ದನಗಾಹಿಗಳು ಜಾನುವಾರುಗಳನ್ನು ಹೊಲದಲ್ಲಿ ಮೇಯಿಸುತ್ತಿದ್ದ ಸಮಯದಲ್ಲಿ ಪೊದೆಯಿಂದ ಹುಲಿ ದಾಳಿ ನಡೆಸಿ ಬೇಟೆಗೆ ಯತ್ನಿಸಿದೆ. ಈ ಸಮಯದಲ್ಲಿ ದನಗಾಹಿಗಳು ಕೂಗಾಡಿದ್ದರಿಂದ ಹುಲಿ ಓಡಿ ಹೋಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಈ ವಿಷಯವನ್ನು ನಾಗರಹೊಳೆ ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ಹುಲಿ ಸೆರೆ ಹಿಡಿಯುವಂತೆ ನೇರಳಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯೆ ಸುಂದರಮ್ಮ ಮಹದೇವ್ ಆಗ್ರಹಿಸಿದ್ದಾರೆ.
ಈ ಭಾಗದ ತರಗನ್ ಎಸ್ಟೇಟ್ ನಲ್ಲಿ ಹುಲಿ ಅಡಗಿದೆ ಎಂದು ಅರಣ್ಯ ಇಲಾಖೆ ಒಂದು ತಿಂಗಳು ಕಾರ್ಯಾಚರಣೆ ನಡೆಸಿದ್ದರೂ ಹುಲಿ ಸೆರೆ ಸಿಗಲಿಲ್ಲ. ಹಾಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು